ವಚನ ಸಾಹಿತ್ಯದ ರಕ್ಷಕ ‘ವೀರ ಮಡಿವಾಳ ಮಾಚಿದೇವ’ದ ಸಿನಿಮಾದ ಮೊದಲ ಪ್ರತಿ ಸಿದ್ದವಾಗಿದೆ. ಸೆನ್ಸಾರ್ ಮಂಡಳಿ ಒಪ್ಪಿಗೆ ಪಡೆದ ನಂತರ ಚಿತ್ರದ ಪ್ರದರ್ಶನ ವ್ಯವಸ್ಥೆ ಮಾಡಲಾಗುವುದು ಎಂದು ನಿರ್ದೇಶಕ ನಂದಿ ಕಾಮೇಶ್ವರ ರೆಡ್ಡಿ ಅವರು ತಿಳಿಸಿದ್ದಾರೆ.
೧೨ನೇ ಶತಮಾನದ ಕ್ರಾಂತಿಕಾರಿ ವೀರ ಮಡಿವಾಳ ಮಾಚಿದೇವ ವಿಶ್ವ ಗುರು ಬಸವಣ್ಣ ಅವರ ವಚನಗಳನ್ನು ರಕ್ಷಿಸಿ ತನ್ನ ಸಿದ್ದಾಂತವನ್ನು ಸಹ ಪ್ರಸ್ತುತ ಪಡಿಸಿದ ಮಹಾನ್ ವ್ಯಕ್ತಿ. ಆ ಪಾತ್ರವನ್ನು ಡೈಲಾಗ್ಕಿಂಗ್ ಸಾಯಿಕುಮಾರ್ ಅವರು ನಿರ್ವಹಿಸಿದ್ದಾರೆ. ಟಿ. ಸಿದ್ದೇಶ್ವರ ಅವರು ಈ ಚಿತ್ರದ ನಿರ್ಮಾಪಕರು. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಚಿತ್ರ ತಯಾರಿಸಿದ್ದಾರೆ.
೧೩ ವಚನಗಳಿಗೆ ನಾದ ಬ್ರಹ್ಮ ಹಂಸಲೇಖ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಗಜೇಂದ್ರ ಅವರ ಸಂಭಾಷಣೆ, ರಾಮ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ.
ಸಾಯಿಕುಮಾರ್ ಅಲ್ಲದೆ ಚಾರುಲತಾ, ರಮೇಶ್ ಭಟ್, ವಿಜಯಕಾಶಿ, ಬಿ.ಸಿ. ಪಾಟೀಲ್, ಶ್ರೀನಿವಾಸಪ್ರಭು, ಸತ್ಯಜಿತ್, ಸತ್ಯಪ್ರಕಾಶ್, ಉಮೇಶ್ ಹಾಗೂ ಇತರರು ಇದ್ದಾರೆ.